
ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಶ್ರೀಕಾಂತ್ ಶೆಟ್ಟಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್
ಪ್ರಚೋದನಕಾರಿ ಹೇಳಿಕೆ ವಿಚಾರ; ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಶ್ರೀಕಾಂತ್ ಶೆಟ್ಟಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್
ಪ್ರಚೋದನಕಾರಿ ಭಾಷಣ ವಿಚಾರಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ಸದ್ಯಕ್ಕೆ ಎಲ್ಲಾ ಮಾದ್ಯಮಗಳಲ್ಲಿರುವ ಸುದ್ದಿ. ಆದರೆ ಇದರ ನಡುವೆ ಆರ್. ಎಸ್. ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ವಾಗ್ಮಿ ಶ್ರೀಕಾಂತ್ ಶೆಟ್ಟಿ ವಿರುದ್ಧವಾಗಿ ಎಫ್.ಐ. ಆರ್. ಹಾಕಿರುವುದನ್ನು ಖಂಡಿಸಿ ಆರ್. ಎಸ್. ಎಸ್. ಸಂಘಟನೆ ಹೈಕೋರ್ಟ್ ಗೆ ಅಪಿಲು ಹಾಕಿದ ಹಿನ್ನೆಲೆ ಇದೀಗ ಬಿಗ್ ರಿಲೀಫ್ ದೊರೆತಿದೆ.
ಕೆ. ಪ್ರಭಾಕರ್ ಭಟ್ ಹಾಗೂ ಶ್ರೀಕಾಂತ್ ಶೆಟ್ಟಿ ಪರವಾಗಿ ವಾದ ಮಂಡಿಸಿದ ಅರುಣ್ ಶಾಮ್ ಇಬ್ಬರ ಮೇಲೆ ಹಾಕಿರುವ ಕೇಸುಗಳ ಕುರಿತು ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯವಾದಿ ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಇಬ್ಬರ ಪ್ರಕರಣಕ್ಕೂ ಸಂಬಂಧಪಟ್ಟು ಮುಂದಿನ ವಿಚಾರಣೆ ನಡೆಯುವವರೆಗೆ ಪೊಲೀಸ್ ಇಲಾಖೆ ಇವರಿಬ್ಬರ ವಿರುದ್ಧ ಬಂಧನ ಸೇರಿದಂತೆ ಇತರ ಯಾವುದೇ ಒತ್ತಡ ಹಾಗೂ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಜೂನ್ ೧೦ ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.



