ಹೆಬ್ರಿ ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ರಾಮಕೃಷ್ಣ ಆಚಾರ್.
ಹೆಬ್ರಿ : ಹೆಬ್ರಿ ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ರಾಗಿಹಕ್ಲು ರಾಮಕೃಷ್ಣ ಆಚಾರ್ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ರತ್ನಾಕರ ಆಚಾರ್ಯ ಶಿವಪುರ, ಉಪಾಧ್ಯಕ್ಷರಾಗಿ ಕೇಶವ ಆಚಾರ್ಯ ಮುದ್ರಾಡಿ, ಕಾರ್ಯದರ್ಶಿಯಾಗಿ ಎಚ್ಎಂ ಶಶಿಶಂಕರ್, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಆಚಾರ್ಯ ಮದಗ, ಸಂಘಟನಾ ಕಾರ್ಯದರ್ಶಿಯಾಗಿ ಸದಾಶಿವ ಆಚಾರ್ಯ ರಾಗಿಹಕ್ಲು, ಕೋಶಾಧಿಕಾರಿಯಾಗಿ ರವೀಂದ್ರ ಪುರೋಹಿತ್ ಹೆಬ್ರಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನರಸಿಂಹ ಆಚಾರ್ಯ ವರಂಗ, ಎಂ.ಪಿ.ಜಯರಾಮ ಆಚಾರ್ಯ ಚಾರ, ರಾಘವೇಂದ್ರ ಆಚಾರ್ಯ ರಾಗಿಹಕ್ಲು, ಮಂಜುನಾಥ ಆಚಾರ್ಯ ಸೀತಾನದಿ, ನಾರಾಯಣ ಆಚಾರ್ಯ ಕಾನ್ಬೆಟ್ಟು, ರಾಜೇಶ ಆಚಾರ್ಯ ಮಠದಬೆಟ್ಟು, ಜಗನ್ನಾಥ ಆಚಾರ್ಯ ಸೇಳಂಜೆ, ರಾಘವ ಆಚಾರ್ಯ ಮುದ್ರಾಡಿ, ಗೌರವ ಸಲಹೆಗಾರರಾಗಿ ಟಿ.ಜಿ.ಆಚಾರ್ಯ ಹೆಬ್ರಿ, ಕೃಷ್ಣ ಆಚಾರ್ಯ ಹೆಬ್ರಿ, ಸಂಕ್ರಯ್ಯ ಆಚಾರ್ಯ, ಶ್ರೀಧರ ಆಚಾರ್ಯ ಶಿವಪುರ, ಶೇಖರ ಆಚಾರ್ಯ ಹೆಬ್ರಿ ಆಯ್ಕೆಯಾಗಿದ್ದಾರೆ.