Saturday, July 27, 2024

ಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

Homeಕಾರ್ಕಳಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

ಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

ಕಾಂತಾವರ: ಮೂವತ್ತೆಂಟು ವರ್ಷಗಳಿಂದ ಯಕ್ಷಗಾನ ಕಲಾಕ್ಷೇತ್ರದಲ್ಲಿ ಕಲಾವಿದರಾಗಿ, ಸಂಘಟಕರಾಗಿ, ನಾಟ್ಯ ಗುರುವಾಗಿ ಕಲಾಸೇವೆ ಗೈದ ಮಹಾವೀರ ಪಾಂಡಿಯವರಿಗೆ ಅರುವತ್ತು ತುಂಬಿದ ಸದವಸರದಲ್ಲಿ ತನ್ನ ಹುಟ್ಟೂರಿನಲ್ಲಿ ಓದಿದ ಶಾಲೆಯಲ್ಲಿ ಸನ್ಮಾನವಾಯಿತು.

ಕಾಂತಾವರದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಹಾಗೂ ನಾಡ ಹಬ್ಬದ ಸುವರ್ಣ ಸಂಭ್ರಮದ ಸಂಧರ್ಭದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಸಮಿತಿ ಸದಸ್ಯ ಡಾ. ಮಾದವ ಎಂ.ಕೆ.ಯವರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಗ್ರಂಥಪಾಲಕರಾದ ಸತೀಶ್ ಶೆಟ್ಟಿಯವರು ಶಿಕ್ಷಣ ಸಂಸ್ಥೆಗಳಲ್ಲಿ ಹಬ್ಬ ಹರಿದಿನಗಳ ಆಚರಣೆ ಬಗ್ಗೆ ನಿಯೋಜಿತ ಭಾಷಣ ಮಾಡಿದರು.

ಅಥಿತಿಗಳಾಗಿ ಗ್ರಾ.ಪಂ.ಅದ್ಯಕ್ಷರಾದ ರಾಜೇಶ್ ಕೋಟ್ಯಾನ್, ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಭಾಸ್ಕರ ಟಿ.ಕೆದಿಂಜೆ ಶಾಲೆಯ ಮುಖ್ಯ ಶಿಕ್ಷಕ ಪೃಥ್ವಿರಾಜ್ ಬಲ್ಲಾಳ್ ಶಾಲಾಭಿವೃಧ್ದಿ ಸಮಿತಿ ಅದ್ಯಕ್ಷ ಜಯಕರ ಕೋಟ್ಯಾನ್,ಶಾಲಾ ಸಂಚಲಕರಾದ ಶ್ರೀಪತಿ ರಾವ್,ನಿವೃತ್ತ ಶಿಕ್ಷಕಿ ಶ್ಯಾಮಲ ಕುಮಾರಿ ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಜಯ ಎಸ್. ಕೋಟ್ಯಾನ್, ಲಿಂಗಪ್ಪ ದೇವಾಡಿಗ, ಸುಕೇಶ್ ಕೋಟ್ಯಾನ್, ರಘುನಾಥ್ ದೇವಾಡಿಗ, ಎಂ.ಸಿ. ಎಫ್ ನ ನಿವೃತ್ತ ಎಂಡಿ ಪ್ರಭಾಕರ್ ರಾವ್ ಉಪಸ್ಥಿತರಿದ್ದರು. ಶಾಲಾ ಹಳೆ ವಿದ್ಯಾರ್ಥಿ ಉಪನ್ಯಾಸಕ ಶಿವಪ್ರಸಾದ್ ಭಟ್ ಪಾಂಡಿಯವರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಅರುಣ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಗೌರವ ಶಿಕ್ಷಕಿ ಕು.ಗೀತಾ ದೇವಾಡಿಗ ವಂದನಾರ್ಪಣೆಗೈದರು.ನಂತರ ಶಾಲಾ ಮಕ್ಕಳಿಂದ ನೃತ್ಯ ವಿನೋದಾವಳಿ ,ಮತ್ತು ಮಹಿಷಮರ್ದಿನಿ ಹಾಗೂ ರಾಮಾಶ್ವಮೇಧ ಯಕ್ಷಗಾನ ಮಹೇಶ್ ಕನ್ಯಾಡಿ, ದಿವಾಕರ ಆಚಾರ್ಯ, ಶಿವಪ್ರಸಾದ ಭಟ್, ರವಿರಾಜ ಜೈನ್, ದೇವಾನಂದ ಭಟ್, ಶಿತಿಕಂಠ ಭಟ್ ಆನಂದ ಗುಡಿಗಾರರ ಹಿಮ್ಮೇಳದೊದಿಗೆ ಧರ್ಮರಾಜ ಕಂಬಳಿ ಯವರ ನಿರ್ದೇಶನದಲ್ಲಿ ಬಯಲಾಟ ಜರಗಿತು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

ಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

Homeಕಾರ್ಕಳಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

ಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

ಕಾಂತಾವರ: ಮೂವತ್ತೆಂಟು ವರ್ಷಗಳಿಂದ ಯಕ್ಷಗಾನ ಕಲಾಕ್ಷೇತ್ರದಲ್ಲಿ ಕಲಾವಿದರಾಗಿ, ಸಂಘಟಕರಾಗಿ, ನಾಟ್ಯ ಗುರುವಾಗಿ ಕಲಾಸೇವೆ ಗೈದ ಮಹಾವೀರ ಪಾಂಡಿಯವರಿಗೆ ಅರುವತ್ತು ತುಂಬಿದ ಸದವಸರದಲ್ಲಿ ತನ್ನ ಹುಟ್ಟೂರಿನಲ್ಲಿ ಓದಿದ ಶಾಲೆಯಲ್ಲಿ ಸನ್ಮಾನವಾಯಿತು.

ಕಾಂತಾವರದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಹಾಗೂ ನಾಡ ಹಬ್ಬದ ಸುವರ್ಣ ಸಂಭ್ರಮದ ಸಂಧರ್ಭದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಸಮಿತಿ ಸದಸ್ಯ ಡಾ. ಮಾದವ ಎಂ.ಕೆ.ಯವರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಗ್ರಂಥಪಾಲಕರಾದ ಸತೀಶ್ ಶೆಟ್ಟಿಯವರು ಶಿಕ್ಷಣ ಸಂಸ್ಥೆಗಳಲ್ಲಿ ಹಬ್ಬ ಹರಿದಿನಗಳ ಆಚರಣೆ ಬಗ್ಗೆ ನಿಯೋಜಿತ ಭಾಷಣ ಮಾಡಿದರು.

ಅಥಿತಿಗಳಾಗಿ ಗ್ರಾ.ಪಂ.ಅದ್ಯಕ್ಷರಾದ ರಾಜೇಶ್ ಕೋಟ್ಯಾನ್, ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಭಾಸ್ಕರ ಟಿ.ಕೆದಿಂಜೆ ಶಾಲೆಯ ಮುಖ್ಯ ಶಿಕ್ಷಕ ಪೃಥ್ವಿರಾಜ್ ಬಲ್ಲಾಳ್ ಶಾಲಾಭಿವೃಧ್ದಿ ಸಮಿತಿ ಅದ್ಯಕ್ಷ ಜಯಕರ ಕೋಟ್ಯಾನ್,ಶಾಲಾ ಸಂಚಲಕರಾದ ಶ್ರೀಪತಿ ರಾವ್,ನಿವೃತ್ತ ಶಿಕ್ಷಕಿ ಶ್ಯಾಮಲ ಕುಮಾರಿ ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಜಯ ಎಸ್. ಕೋಟ್ಯಾನ್, ಲಿಂಗಪ್ಪ ದೇವಾಡಿಗ, ಸುಕೇಶ್ ಕೋಟ್ಯಾನ್, ರಘುನಾಥ್ ದೇವಾಡಿಗ, ಎಂ.ಸಿ. ಎಫ್ ನ ನಿವೃತ್ತ ಎಂಡಿ ಪ್ರಭಾಕರ್ ರಾವ್ ಉಪಸ್ಥಿತರಿದ್ದರು. ಶಾಲಾ ಹಳೆ ವಿದ್ಯಾರ್ಥಿ ಉಪನ್ಯಾಸಕ ಶಿವಪ್ರಸಾದ್ ಭಟ್ ಪಾಂಡಿಯವರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಅರುಣ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಗೌರವ ಶಿಕ್ಷಕಿ ಕು.ಗೀತಾ ದೇವಾಡಿಗ ವಂದನಾರ್ಪಣೆಗೈದರು.ನಂತರ ಶಾಲಾ ಮಕ್ಕಳಿಂದ ನೃತ್ಯ ವಿನೋದಾವಳಿ ,ಮತ್ತು ಮಹಿಷಮರ್ದಿನಿ ಹಾಗೂ ರಾಮಾಶ್ವಮೇಧ ಯಕ್ಷಗಾನ ಮಹೇಶ್ ಕನ್ಯಾಡಿ, ದಿವಾಕರ ಆಚಾರ್ಯ, ಶಿವಪ್ರಸಾದ ಭಟ್, ರವಿರಾಜ ಜೈನ್, ದೇವಾನಂದ ಭಟ್, ಶಿತಿಕಂಠ ಭಟ್ ಆನಂದ ಗುಡಿಗಾರರ ಹಿಮ್ಮೇಳದೊದಿಗೆ ಧರ್ಮರಾಜ ಕಂಬಳಿ ಯವರ ನಿರ್ದೇಶನದಲ್ಲಿ ಬಯಲಾಟ ಜರಗಿತು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

ಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

Homeಕಾರ್ಕಳಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

ಕಾಂತಾವರ:ಮಹಾವೀರ ಪಾಂಡಿಯವರಿಗೆ ಹುಟ್ಟೂರಿನ ಸನ್ಮಾನ

ಕಾಂತಾವರ: ಮೂವತ್ತೆಂಟು ವರ್ಷಗಳಿಂದ ಯಕ್ಷಗಾನ ಕಲಾಕ್ಷೇತ್ರದಲ್ಲಿ ಕಲಾವಿದರಾಗಿ, ಸಂಘಟಕರಾಗಿ, ನಾಟ್ಯ ಗುರುವಾಗಿ ಕಲಾಸೇವೆ ಗೈದ ಮಹಾವೀರ ಪಾಂಡಿಯವರಿಗೆ ಅರುವತ್ತು ತುಂಬಿದ ಸದವಸರದಲ್ಲಿ ತನ್ನ ಹುಟ್ಟೂರಿನಲ್ಲಿ ಓದಿದ ಶಾಲೆಯಲ್ಲಿ ಸನ್ಮಾನವಾಯಿತು.

ಕಾಂತಾವರದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಹಾಗೂ ನಾಡ ಹಬ್ಬದ ಸುವರ್ಣ ಸಂಭ್ರಮದ ಸಂಧರ್ಭದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಸಮಿತಿ ಸದಸ್ಯ ಡಾ. ಮಾದವ ಎಂ.ಕೆ.ಯವರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಗ್ರಂಥಪಾಲಕರಾದ ಸತೀಶ್ ಶೆಟ್ಟಿಯವರು ಶಿಕ್ಷಣ ಸಂಸ್ಥೆಗಳಲ್ಲಿ ಹಬ್ಬ ಹರಿದಿನಗಳ ಆಚರಣೆ ಬಗ್ಗೆ ನಿಯೋಜಿತ ಭಾಷಣ ಮಾಡಿದರು.

ಅಥಿತಿಗಳಾಗಿ ಗ್ರಾ.ಪಂ.ಅದ್ಯಕ್ಷರಾದ ರಾಜೇಶ್ ಕೋಟ್ಯಾನ್, ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಭಾಸ್ಕರ ಟಿ.ಕೆದಿಂಜೆ ಶಾಲೆಯ ಮುಖ್ಯ ಶಿಕ್ಷಕ ಪೃಥ್ವಿರಾಜ್ ಬಲ್ಲಾಳ್ ಶಾಲಾಭಿವೃಧ್ದಿ ಸಮಿತಿ ಅದ್ಯಕ್ಷ ಜಯಕರ ಕೋಟ್ಯಾನ್,ಶಾಲಾ ಸಂಚಲಕರಾದ ಶ್ರೀಪತಿ ರಾವ್,ನಿವೃತ್ತ ಶಿಕ್ಷಕಿ ಶ್ಯಾಮಲ ಕುಮಾರಿ ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಜಯ ಎಸ್. ಕೋಟ್ಯಾನ್, ಲಿಂಗಪ್ಪ ದೇವಾಡಿಗ, ಸುಕೇಶ್ ಕೋಟ್ಯಾನ್, ರಘುನಾಥ್ ದೇವಾಡಿಗ, ಎಂ.ಸಿ. ಎಫ್ ನ ನಿವೃತ್ತ ಎಂಡಿ ಪ್ರಭಾಕರ್ ರಾವ್ ಉಪಸ್ಥಿತರಿದ್ದರು. ಶಾಲಾ ಹಳೆ ವಿದ್ಯಾರ್ಥಿ ಉಪನ್ಯಾಸಕ ಶಿವಪ್ರಸಾದ್ ಭಟ್ ಪಾಂಡಿಯವರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಅರುಣ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಗೌರವ ಶಿಕ್ಷಕಿ ಕು.ಗೀತಾ ದೇವಾಡಿಗ ವಂದನಾರ್ಪಣೆಗೈದರು.ನಂತರ ಶಾಲಾ ಮಕ್ಕಳಿಂದ ನೃತ್ಯ ವಿನೋದಾವಳಿ ,ಮತ್ತು ಮಹಿಷಮರ್ದಿನಿ ಹಾಗೂ ರಾಮಾಶ್ವಮೇಧ ಯಕ್ಷಗಾನ ಮಹೇಶ್ ಕನ್ಯಾಡಿ, ದಿವಾಕರ ಆಚಾರ್ಯ, ಶಿವಪ್ರಸಾದ ಭಟ್, ರವಿರಾಜ ಜೈನ್, ದೇವಾನಂದ ಭಟ್, ಶಿತಿಕಂಠ ಭಟ್ ಆನಂದ ಗುಡಿಗಾರರ ಹಿಮ್ಮೇಳದೊದಿಗೆ ಧರ್ಮರಾಜ ಕಂಬಳಿ ಯವರ ನಿರ್ದೇಶನದಲ್ಲಿ ಬಯಲಾಟ ಜರಗಿತು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add