ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ನಾಟ್ಕದೂರಿನ ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ 9 ದಿನಗಳ ಕಾಲ ನಡೆದ 23ನೇ ವರ್ಷದ ನವರಂಗೋತ್ಸವ ನಾಟ್ಕ ಮುದ್ರಾಡಿಯ 38ನೇ ವರ್ಷದ ಸಂಭ್ರಮ ಚಿಣ್ಣರ ಯಕ್ಷಾಂಗಣದ ಸಮಾರೋಪದಲ್ಲಿ ಸೋಮವಾರ ಯುವ ಕಲಾವಿದ ನಿರ್ದೇಶಕ ಅಜೆಕಾರಿನ ಪ್ರಥ್ವಿನ್ ಕೆ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುದ್ರಾಡಿ :23ನೇ ವರ್ಷದ ನವರಂಗೋತ್ಸವ:ಚಿಣ್ಣರ ಯಕ್ಷಾಂಗಣ ಸಂಪನ್ನ.
ಅಜೆಕಾರಿನ ಪ್ರಥ್ವಿನ್ ಕೆ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಪ್ರದಾನ.
ಮುದ್ರಾಡಿ ಅಪರೂಪದ ಧರ್ಮ ಕಲೆಯ ಕ್ಷೇತ್ರ : ಶೇಖರ ಅಜೆಕಾರು.
ಹೆಬ್ರಿ : ಧರ್ಮದ ಜೊತೆಗೆ ಕಲೆಯ ಸೇವೆಯನ್ನು ಒಟ್ಟಿಗೆ ಮಾಡಿಕೊಂಡು, ನಿರಂತರ ವಿನೂತನ ಕಾರ್ಯಗಳ ಮೂಲಕ ಗಮನ ಸೆಳೆವ ಅಪರೂಪದ ಧರ್ಮ ಕ್ಷೇತ್ರ ಮುದ್ರಾಡಿಯ ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರ ಮುದ್ರಾಡಿ ಎಂದು ಸಾಹಿತಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಶೇಖರ ಅಜೆಕಾರು ಹೇಳಿದರು.
ಅವರು ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ನಾಟ್ಕದೂರಿನ ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ 9 ದಿನಗಳ ಕಾಲ ನಡೆದ 23ನೇ ವರ್ಷದ ನವರಂಗೋತ್ಸವ ನಾಟ್ಕ ಮುದ್ರಾಡಿಯ 38ನೇ ವರ್ಷದ ಸಂಭ್ರಮ ಚಿಣ್ಣರ ಯಕ್ಷಾಂಗಣದ ಸಮಾರೋಪದಲ್ಲಿ ಮಾತನಾಡಿದರು.
ಯುವ ಕಲಾವಿದ ನಿರ್ದೇಶಕ ಅಜೆಕಾರಿನ ಪ್ರಥ್ವಿನ್ ಕೆ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ದೊಡ್ಡ ವ್ಯಕ್ತಿಯ ಹೆಸರಿನ ಪ್ರಶಸ್ತಿಯು ಸಣ್ಣ ವ್ಯಕ್ತಿಗೆ ಸಿಕ್ಕಿದೆ. ಅತೀವ ಆನಂದವಾಗಿದೆ. ಜವಾಬ್ಧಾರಿಗಳು ಹೆಚ್ಚಿದೆ. ರಂಗಭೂಮಿಯಲ್ಲಿ ಇನ್ನಷ್ಟು ಜನಸೇವೆ ಮಾಡುವೆ ಎಂದು ಕೃತಜ್ಞತೆ ಸಲ್ಲಿಸಿದರು.
ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಅಧ್ಯಕ್ಷ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ, ಶಿಕ್ಷಕ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ, ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷರಾದ ಧರ್ಮಾಧಿಕಾರಿ ಸುಕುಮಾರ್ ಮೋಹನ್, ಕಮಲಾ ಮೋಹನ್, ಉಮೇಶ್ ಕಲ್ಮಾಡಿ ಉಪಸ್ಥಿತರಿದ್ದರು. ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಅವರ ನಿರ್ದೇಶನದಲ್ಲಿ ಪ್ರೌಢಶಾಲೆಯ ಮಕ್ಕಳಿಂದ ರಾಣಿ ಚೆನ್ನಬೈರಾದೇವಿ ಯಕ್ಷಗಾನ ತಾಳಮದ್ದಳೆ ನಡೆಯಿತು.
ವರಂಗದ ವಕೀಲ ಸುರೇಶ ಪೂಜಾರಿ ಸ್ವಾಗತಿಸಿದರು. ಡಾ.ಪ್ರವೀಣ್ ಕುಮಾರ್ ನಿರೂಪಿಸಿದರು.
ಮುದ್ರಾಡಿಯ 52ನೇ ವರ್ಷದ ದಸರಾ ಮಹೋತ್ಸವ ಸಂಪನ್ನ: ಮುದ್ರಾಡಿಯ ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರ ಮುದ್ರಾಡಿಯ ಸಂಪನ್ನ ಕಾರ್ಯಕ್ರಮ ಮಂಗಳವಾರ ನಡೆಯಿತು. ಭಜನಾ ಕಾರ್ಯಕ್ರಮ, ಮಹಾರಂಗಪೂಜೆ, ಸಹಸ್ರ ಪುಪ್ಪಾರ್ಚನೆ, ಸಹಸ್ರ ಕುಂಕುಮಾರ್ಚನೆ, ಶ್ರೀದೇವಿ ಪುರಾಣ ಪಾರಾಯಣ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸಾಣೂರು ಅಂಬಾ ಯಕ್ಷಸಭಾ ಇವರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ನಡೆಯಿತು.
ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಅವರ ನಿರ್ದೇಶನದಲ್ಲಿ ಶಿಕ್ಷಕ ಶ್ರೀನಿವಾಸ ಭಂಡಾರಿ ಸಹಕಾರದಲ್ಲಿ ಮುದ್ರಾಡಿ ಪರಿಸರದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಪಠ್ಯಾಧಾರಿತ ಯಕ್ಷಗಾನ ತಾಳಮದ್ದಳೆ ಸ್ಪರ್ಧೆ ಚಿಣ್ಣರ ಯಕ್ಷಗಾನ ತಾಳಮದ್ದಲೆ ನಡೆಯಿತು.