Monday, April 29, 2024

ಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ ನೀರಿನ ಟ್ಯಾಂಕ್ ಕುಸಿದು ಬಿದ್ದು ಬೆಳ್ಮಣ್ಣ್ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸಾವು

Homeಕಾರ್ಕಳಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ ನೀರಿನ ಟ್ಯಾಂಕ್ ಕುಸಿದು ಬಿದ್ದು...

ಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ

ನೀರಿನ ಟ್ಯಾಂಕ್ ಕುಸಿದು ಬಿದ್ದು ಬೆಳ್ಮಣ್ಣ್ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸಾವು

ನಂದಳಿಕೆ:ದೇವಸ್ಥಾನದಲ್ಲಿ ಊಟ ಮಾಡಿದ ಬಳಿಕ ಪ್ಲೇಟನ್ನು ಬಿಸಾಡಲು ದೇವಸ್ಥಾನದ ಹಿಂಬದಿಯ ನೀರಿನ ಟ್ಯಾಂಕ್ ಬಳಿ ಹೋಗಿದ್ದಾಗ ನೀರಿನ ಟ್ಯಾಂಕ್ ಅಕಸ್ಮಿಕವಾಗಿ ಕುಸಿದು ಬಿದ್ದು ತಾಯಿ ಸಾವನ್ನಪ್ಪಿ ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ಜ.30ರಂದು ರಾತ್ರಿ 10:30ಕ್ಕೆ ನಡೆದಿದೆ. ಶ್ರೀಲತಾ (50)ಮೃತ ದುರ್ದೈವಿ.

ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಮಾರಿಪೂಜೆಗೆ ಶ್ರೀಲತಾ ಹಾಗೂ ಅವರ ಮಗಳು ಪೂಜಾ ಹೋಗಿದ್ದು ರಾತ್ರಿ ದೇವಸ್ಥಾನದಲ್ಲಿ ಊಟ ಮಾಡಿ, ಊಟ ಮಾಡಿದ ಪ್ಲೇಟನ್ನು ದೇವಸ್ಥಾನದ ಹಿಂಭಾಗದ ನೀರಿನ ಟ್ಯಾಂಕ್‌ನ ಬಳಿ ಇಡಲು ಹೋದಾಗ, ದೇವಸ್ಥಾನದ ಹಿಂಭಾಗದಲ್ಲಿದ್ದ ನೀರಿನ ಟ್ಯಾಂಕ್ ಅಕಸ್ಮಿಕವಾಗಿ ಕುಸಿದು ಶ್ರೀಲತಾ ಮತ್ತು ಪೂಜಾ ಇವರ ಮೈಮೇಲೆ ಬಿದ್ದಿದೆ.

ಘಟನೆಯ ತೀವ್ರತೆಗೆ ಶ್ರೀಲತಾರವರು ತೀವೃ ಗಾಯಗೊಂಡಿದ್ದು ಅಂಬುಲೆನ್ಸ್ ವಾಹನದಲ್ಲಿ ಕುಳ್ಳಿರಿಸುವಾಗಲೇ ಮೃತಪಟ್ಟಿದ್ದು,ಪೂಜಾರರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಶ್ರೀಲತಾರವರು ಬೆಲ್ಮನ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದರು.ರಾತ್ರಿ 10:30ಕ್ಕೆ ಘಟನೆ ನಡೆದಿದ್ದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರೀತ್ ಶೆಟ್ಟಿ ಕೆದಿಂಜೆ ಆಂಬುಲೆನ್ಸ್ ನೊಂದಿಗೆ ತಕ್ಷಣವೇ ಸ್ಥಳಕ್ಕಾಗಮಿಸಿದ್ದರು.ಆದರೆ ಆಸ್ಪತ್ರೆ ಸೇರಿಸುವ ಮೊದಲೇ ಶ್ರೀಲತಾರವರು ಮೃತಪಟ್ಟಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

ಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ ನೀರಿನ ಟ್ಯಾಂಕ್ ಕುಸಿದು ಬಿದ್ದು ಬೆಳ್ಮಣ್ಣ್ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸಾವು

Homeಕಾರ್ಕಳಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ ನೀರಿನ ಟ್ಯಾಂಕ್ ಕುಸಿದು ಬಿದ್ದು...

ಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ

ನೀರಿನ ಟ್ಯಾಂಕ್ ಕುಸಿದು ಬಿದ್ದು ಬೆಳ್ಮಣ್ಣ್ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸಾವು

ನಂದಳಿಕೆ:ದೇವಸ್ಥಾನದಲ್ಲಿ ಊಟ ಮಾಡಿದ ಬಳಿಕ ಪ್ಲೇಟನ್ನು ಬಿಸಾಡಲು ದೇವಸ್ಥಾನದ ಹಿಂಬದಿಯ ನೀರಿನ ಟ್ಯಾಂಕ್ ಬಳಿ ಹೋಗಿದ್ದಾಗ ನೀರಿನ ಟ್ಯಾಂಕ್ ಅಕಸ್ಮಿಕವಾಗಿ ಕುಸಿದು ಬಿದ್ದು ತಾಯಿ ಸಾವನ್ನಪ್ಪಿ ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ಜ.30ರಂದು ರಾತ್ರಿ 10:30ಕ್ಕೆ ನಡೆದಿದೆ. ಶ್ರೀಲತಾ (50)ಮೃತ ದುರ್ದೈವಿ.

ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಮಾರಿಪೂಜೆಗೆ ಶ್ರೀಲತಾ ಹಾಗೂ ಅವರ ಮಗಳು ಪೂಜಾ ಹೋಗಿದ್ದು ರಾತ್ರಿ ದೇವಸ್ಥಾನದಲ್ಲಿ ಊಟ ಮಾಡಿ, ಊಟ ಮಾಡಿದ ಪ್ಲೇಟನ್ನು ದೇವಸ್ಥಾನದ ಹಿಂಭಾಗದ ನೀರಿನ ಟ್ಯಾಂಕ್‌ನ ಬಳಿ ಇಡಲು ಹೋದಾಗ, ದೇವಸ್ಥಾನದ ಹಿಂಭಾಗದಲ್ಲಿದ್ದ ನೀರಿನ ಟ್ಯಾಂಕ್ ಅಕಸ್ಮಿಕವಾಗಿ ಕುಸಿದು ಶ್ರೀಲತಾ ಮತ್ತು ಪೂಜಾ ಇವರ ಮೈಮೇಲೆ ಬಿದ್ದಿದೆ.

ಘಟನೆಯ ತೀವ್ರತೆಗೆ ಶ್ರೀಲತಾರವರು ತೀವೃ ಗಾಯಗೊಂಡಿದ್ದು ಅಂಬುಲೆನ್ಸ್ ವಾಹನದಲ್ಲಿ ಕುಳ್ಳಿರಿಸುವಾಗಲೇ ಮೃತಪಟ್ಟಿದ್ದು,ಪೂಜಾರರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಶ್ರೀಲತಾರವರು ಬೆಲ್ಮನ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದರು.ರಾತ್ರಿ 10:30ಕ್ಕೆ ಘಟನೆ ನಡೆದಿದ್ದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರೀತ್ ಶೆಟ್ಟಿ ಕೆದಿಂಜೆ ಆಂಬುಲೆನ್ಸ್ ನೊಂದಿಗೆ ತಕ್ಷಣವೇ ಸ್ಥಳಕ್ಕಾಗಮಿಸಿದ್ದರು.ಆದರೆ ಆಸ್ಪತ್ರೆ ಸೇರಿಸುವ ಮೊದಲೇ ಶ್ರೀಲತಾರವರು ಮೃತಪಟ್ಟಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

ಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ ನೀರಿನ ಟ್ಯಾಂಕ್ ಕುಸಿದು ಬಿದ್ದು ಬೆಳ್ಮಣ್ಣ್ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸಾವು

Homeಕಾರ್ಕಳಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ ನೀರಿನ ಟ್ಯಾಂಕ್ ಕುಸಿದು ಬಿದ್ದು...

ಕಾರ್ಕಳ:ದೇವಸ್ಥಾನದಲ್ಲಿ ಊಟಮಾಡಿದ ಪ್ಲೇಟನ್ನು ಬಿಸಾಡಲು ಹೋದಾಗ ನಡೆದ ದುರ್ಘಟನೆ

ನೀರಿನ ಟ್ಯಾಂಕ್ ಕುಸಿದು ಬಿದ್ದು ಬೆಳ್ಮಣ್ಣ್ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸಾವು

ನಂದಳಿಕೆ:ದೇವಸ್ಥಾನದಲ್ಲಿ ಊಟ ಮಾಡಿದ ಬಳಿಕ ಪ್ಲೇಟನ್ನು ಬಿಸಾಡಲು ದೇವಸ್ಥಾನದ ಹಿಂಬದಿಯ ನೀರಿನ ಟ್ಯಾಂಕ್ ಬಳಿ ಹೋಗಿದ್ದಾಗ ನೀರಿನ ಟ್ಯಾಂಕ್ ಅಕಸ್ಮಿಕವಾಗಿ ಕುಸಿದು ಬಿದ್ದು ತಾಯಿ ಸಾವನ್ನಪ್ಪಿ ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ಜ.30ರಂದು ರಾತ್ರಿ 10:30ಕ್ಕೆ ನಡೆದಿದೆ. ಶ್ರೀಲತಾ (50)ಮೃತ ದುರ್ದೈವಿ.

ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಮಾರಿಪೂಜೆಗೆ ಶ್ರೀಲತಾ ಹಾಗೂ ಅವರ ಮಗಳು ಪೂಜಾ ಹೋಗಿದ್ದು ರಾತ್ರಿ ದೇವಸ್ಥಾನದಲ್ಲಿ ಊಟ ಮಾಡಿ, ಊಟ ಮಾಡಿದ ಪ್ಲೇಟನ್ನು ದೇವಸ್ಥಾನದ ಹಿಂಭಾಗದ ನೀರಿನ ಟ್ಯಾಂಕ್‌ನ ಬಳಿ ಇಡಲು ಹೋದಾಗ, ದೇವಸ್ಥಾನದ ಹಿಂಭಾಗದಲ್ಲಿದ್ದ ನೀರಿನ ಟ್ಯಾಂಕ್ ಅಕಸ್ಮಿಕವಾಗಿ ಕುಸಿದು ಶ್ರೀಲತಾ ಮತ್ತು ಪೂಜಾ ಇವರ ಮೈಮೇಲೆ ಬಿದ್ದಿದೆ.

ಘಟನೆಯ ತೀವ್ರತೆಗೆ ಶ್ರೀಲತಾರವರು ತೀವೃ ಗಾಯಗೊಂಡಿದ್ದು ಅಂಬುಲೆನ್ಸ್ ವಾಹನದಲ್ಲಿ ಕುಳ್ಳಿರಿಸುವಾಗಲೇ ಮೃತಪಟ್ಟಿದ್ದು,ಪೂಜಾರರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಶ್ರೀಲತಾರವರು ಬೆಲ್ಮನ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದರು.ರಾತ್ರಿ 10:30ಕ್ಕೆ ಘಟನೆ ನಡೆದಿದ್ದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರೀತ್ ಶೆಟ್ಟಿ ಕೆದಿಂಜೆ ಆಂಬುಲೆನ್ಸ್ ನೊಂದಿಗೆ ತಕ್ಷಣವೇ ಸ್ಥಳಕ್ಕಾಗಮಿಸಿದ್ದರು.ಆದರೆ ಆಸ್ಪತ್ರೆ ಸೇರಿಸುವ ಮೊದಲೇ ಶ್ರೀಲತಾರವರು ಮೃತಪಟ್ಟಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add