ನಲ್ಲೂರು:ವ್ಯಕ್ತಿ ಆತ್ಮಹತ್ಯೆ
ಮುಡಾರಿನ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ನಲ್ಲೂರು ಗ್ರಾಮ ನಿವಾಸಿ ಪ್ರವೀಣ್ ಶಂಕರ್ (54) ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.10ರಂದು ನಡೆದಿದೆ.
ಪ್ರವೀಣ್ ಶಂಕರ್ ತನಗೆ ಗೇರು ಬೀಜ ಫ್ಯಾಕ್ಟರಿಯಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಾಯಿ ಮತ್ತು ಅವರ ಪತ್ನಿಯ ಬಳಿ ಹೇಳುತ್ತಿದ್ದು, ಅದೇ ವಿಚಾರದಲ್ಲಿ ಕೆಲವು ದಿನಗಳಿಂದ ಯಾರಲ್ಲಿಯೂ ಹೆಚ್ಚಿಗೆ ಮಾತನಾಡದೇ ಅವರಷ್ಠಕ್ಕೆ ಇದ್ದರು ಎಂದು ತಿಳಿದುಬಂದಿದೆ.
ತಮ್ಮ ಮನೆಯ ಮಹಡಿಮಾಡಿನ ಕಬ್ಬಿಣದ ಜಂತಿಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡವರನ್ನು ನೇಣಿನಿಂದ ಬಿಡಿಸಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರು ಪ್ರವೀಣ್ ಶಂಕರ್ ಇವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.