ಮಣಿಪಾಲ ಕೌಶಲ ಅಭಿವ್ರದ್ಧಿ ಕೇಂದ್ರ ಮತ್ತು ಶಿರ್ಡಿ ಸಾಯಿ ಪದವಿ ಕಾಲೇಜು ಒಡಂಬಡಿಕೆ
ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಶಿಕ್ಷಣವನ್ನು ಪಡೆದಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ವ್ರತ್ತಿಪರ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳಿಗೆ ಅನೇಕ ತರಹದ ಉದ್ಯೋಗದ ಅವಕಾಶಗಳನ್ನು ಪಡೆಯಲು ಸಾಧ್ಯ ಇದರ ಜೊತೆಗೆ ಶಿಕ್ಷಣವನ್ನು ಕಲಿಯಲು ವಯಸ್ಸಿನ ಮಿತಿ ಇಲ್ಲ ಎಂದು ಮಣಿಪಾಲ ಕೌಶಲ ಅಭಿವ್ರದ್ದಿ ಕೇಂದ್ರದ ನಿರ್ದೇಶಕ ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಾಬ್ಲ ಹೇಳಿದರು.
ಅವರು ಶಿರ್ಡಿ ಸಾಯಿ ಪದವಿ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ಮಣಿಪಾಲ ಕೌಶಲ ಅಭಿವ್ರದ್ದಿ ಕೇಂದ್ರದ ಸಹಯೋಗದೊಂದಿಗೆ ನಡೆದ ಒಡಂಬಡಿಕೆ ಪತ್ರದ ವಿನಿಮಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ಹೇಳಿದರು.
ಸಮಾರಂಭದಲ್ಲಿ ಡಾ.ನಾರಾಯಣ ಶೆಣೈ, ರಿಜಿಸ್ಟ್ರಾರ್ ಮಣಿಪಾಲ್ ಕೌಶಲ ಅಭಿವ್ರದ್ದಿ ಕೇಂದ್ರ ಮಣಿಪಾಲ, ಡಾ. ಬಿ.ಎನ್. ಕಾಂತರಾಜ್ ಪ್ರಾಂಶುಪಾಲರು, ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕಾಲೇಜು ಮಣಿಪಾಲ, ಅಭಿಷೇಕ್ ಸುವರ್ಣ ಅಧ್ಯಕ್ಷರು ಶಿರ್ಡಿ ಸಾಯಿ ಪದವಿ ಕಾಲೇಜು ಕಾರ್ಕಳ, ಟ್ರಸ್ಟಿ ಗಳಾದ ಡಾ. ಪೂಜಾ ರಾಣಿ, ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಆಶೀಶ್ ಶೆಟ್ಟಿ, ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯಶ್ರೀ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.