ಜಮ್ಮು:ಕಾಂಗ್ರೆಸ್ ಜತೆ ವಿಲೀನಗೊಂಡ ಕಾಶ್ಮೀರಿ ಪಂಡಿತರ ಸಂಘಟನೆ
“10ವರ್ಷಗಳಿಂದ ಕಾಶ್ಮೀರ ಪಂಡಿತರ ಸಮುದಾಯವನ್ನು ಮೂರ್ಖರನ್ನಾಗಿಸಿದೆ”
ಜಮ್ಮು:ಕಾಶ್ಮೀರಿ ಪಂಡಿತರ ಸಂಘಟನೆಗಳಲ್ಲಿ ಒಂದಾಗಿರುವ ಅಲ್ ಇಂಡಿಯಾ ಕಾಶ್ಮೀರಿ ಹಿಂದೂ ಫಾರಂ (ಎಐಕೆಎಚ್ಎಫ್) ಕಾಂಗ್ರೆಸ್ ಜತೆ ವಿಲೀನಗೊಂಡಿತು.
ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಅವರು ಪಕ್ಷದ ಕಚೇರಿಯಲ್ಲಿ ಮುಖ್ಯಸ್ಥ ರತನ್ ಲಾಲ್ ಭನ್ ಹಾಗೂ ಇತರ ಪಧಾಧಿಕಾರಿಗಳನ್ನು ಪಕ್ಷಕ್ಕೆ ಸ್ವಾಗತಿಸಿದರು.
1998ರಲ್ಲಿ ಸ್ಥಾಪನೆಯಾಗಿರುವ ಎಐಕೆಎಚ್ಎಫ್ ನ ನೂರಾರು ಸದಸ್ಯರು ಕಾಂಗ್ರೆಸ್ ಸೇರಿರುವುದರಿಂದ ಪಕ್ಷದ ಬಲ ಬಲ ವೃದ್ಧಿಸಿದೆ ಎಂದು ವಾನಿ ಹೇಳಿದರು.
‘ಬಿಜೆಪಿಯು ತನ್ನ 10 ವರ್ಷಗಳ ಆಡಳಿತದಲ್ಲಿ ಕಾಶ್ಮೀರಿ ಪಂಡಿತರ ಸಮುದಾಯವನ್ನು ಮೂರ್ಖರನ್ನಾಗಿಸಿದ್ದು, ಕಾಶ್ಮೀರಿ ಪಂಡಿತರ ಎಲ್ಲ ಸಂಘಟನೆಗಳೂ ಕಾಂಗ್ರೆಸ್ ಸೇರಿಕೊಳ್ಳಬೇಕು’ ಎಂದು ಮನವಿ ಮಾಡಿದರು.