Home Blog Page 92

ಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಚಿಂತೆ ಬಿಟ್ಟು, ಬಿಜೆಪಿ ನಾಯಕರಿಂದ ದೌರ್ಜನ್ಯಕ್ಕೊಳಗಾಗಿರುವ ಬಿಜೆಪಿಯ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ: ಪ್ರದೀಪ್ ಬೇಲಾಡಿ

0

ಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಚಿಂತೆ ಬಿಟ್ಟು, ಬಿಜೆಪಿ ನಾಯಕರಿಂದ ದೌರ್ಜನ್ಯಕ್ಕೊಳಗಾಗಿರುವ ಬಿಜೆಪಿಯ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ: ಪ್ರದೀಪ್ ಬೇಲಾಡಿ

ಕಾರ್ಕಳದ ಅತ್ಯಾಚಾರ ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಮೂರನೆ ಆರೋಪಿಯಾದ ಅಭಯ್ ಎನ್ನುವಾತ ಶಾಸಕ ಸುನೀಲ್ ಕುಮಾರ್ ಬೆಂಬಲಿಗ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಕಾರ್ಕಳ ಬಿಜೆಪಿ ಮುಖ ಉಳಿಸಿಕೊಳ್ಳಲು ಪರದಾಡುತ್ತಿದ್ದು ಅತ್ಯಾಚಾರದ ಖಂಡನೆ, ಹೋರಾಟ ಎಲ್ಲವನ್ನೂ ಕೈಬಿಟ್ಟು ಕ್ಷುಲ್ಲಕ ವಿಚಾರಗಳಿಗೆ ಹೇಳಿಕೆಯನ್ನು ನೀಡಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಸುತ್ತಿದೆ. ಅತ್ಯಾಚಾರ ಆರೋಪಿ ಬಿಜೆಪಿ ಬೆಂಬಲಿಗನಾಗಿರುವುದರಿಂದ ಅವಮಾನಕ್ಕೊಳಗಾಗಿರುವ ಕಾರ್ಕಳ ಬಿಜೆಪಿ ನಾಯಕರು ಹೊಸ ವರಸೆಯನ್ನು ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದು ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎನ್ನುವ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಹತಾಶೆಗೆ ಸಾಕ್ಷಿಯಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದು ಕಾರ್ಯಕರ್ತರಿಗೆ ಯಾರ ರಕ್ಷಣೆಯ ಅವಶ್ಯಕತೆಯೂ ಇಲ್ಲ. ಬಂಡವಾಳಶಾಹಿ, ಸರ್ವಾಧಿಕಾರಿ ಮನೋಭಾವನೆಯ ಬಿಜೆಪಿ ನಾಯಕರಿಂದ ಕೊಲೆ, ಹಲ್ಲೆ ಮುಂತಾದ ಕೃತ್ಯಗಳಿಂದ ದೌರ್ಜನ್ಯಕ್ಕೊಳಗಾಗಿರುವ ಬಡ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆಯ ಅಗತ್ಯವಿದೆ. ಬಿಜೆಪಿಯಲ್ಲಿ ಬಡ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆಯೇ ಇಲ್ಲವಾಗಿದ್ದು, ಬಿಜೆಪಿ ನಾಯಕರ ಅನಾಚಾರ, ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡುವ ಬಡ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ, ಮನೆಗೆ ನುಗ್ಗಿ ಹಲ್ಲೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಯಡಮೊಗೆಯ ಉದಯ ಗಾಣಿಗ ಎನ್ನುವ ಬಿಜೆಪಿ ಕಾರ್ಯಕರ್ತನ ಕೊಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರೋಪಿಯಾಗಿರುವುದು ಇದಕ್ಕೆ ಸಾಕ್ಷಿ.

ಹೆಬ್ರಿ ಸಮೀಪದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯವರನ್ನು ಪರಿವಾರ ಸಂಘಟನೆಗಳ ಕಾರ್ಯಕರ್ತರು ನಡು ರಸ್ತೆಯಲ್ಲಿ ಹೊಡೆದು ಸಾಯಿಸಿರುವುದನ್ನು ಜಿಲ್ಲೆಯ ಜನತೆ ಮರೆತಿಲ್ಲ. ಬಿಜೆಪಿ ನಾಯಕರ ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡುತ್ತಿದ್ದ ಬಿಜೆಪಿ ಬೆಂಬಲಿಗರೂ ಆಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತರಾದ ವಿನಾಯಕ ಬಾಳಿಗ ಎನ್ನುವವರನ್ನು ಹತ್ಯೆ ನಡೆಸಿದ ಕೇಸಿನಲ್ಲಿ ಬಿಜೆಪಿ ನಾಯಕ ನರೇಂದ್ರ ಮೋದಿ ಬ್ರಿಗೇಡ್ (ನಮೋ ಬ್ರಿಗೇಡ್) ಇದರ ರಾಜ್ಯಾಧ್ಯಕ್ಷ ನರೇಶ್ ಶೆಣೈ ಕೊಲೆ ಆರೋಪಿಯಾಗಿರುವುದು ಬಿಜೆಪಿಯಲ್ಲಿ ಬಡ ಕಾರ್ಯಕರ್ತರನ್ನು ಹೇಗೆ ಕೊಲೆ ಮಾಡಲಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕಾರ್ಕಳದ ನಗರ ಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ದಿಸಿದ್ದ ಬಡ ಬಿಜೆಪಿ ಕಾರ್ಯಕರ್ತರೋರ್ವರ ಮನೆಗೆ ಅಪರಾತ್ರಿಯಲ್ಲಿ ನುಗ್ಗಿದ ಬಿಜೆಪಿ ಬೆಂಬಲಿಗ ಗೂಂಡಾಗಳು ಮಹಿಳೆಯರನ್ನೂ ಬಿಡದೆ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿರುವುದನ್ನು ಕಾರ್ಕಳದ ಜನತೆ ಮರೆತಿಲ್ಲ.

ಕಾಂಗ್ರೆಸ್ ಕಾರ್ಯಕರ್ತರಿಗೆ ರಕ್ಷಣೆ ನೀಡುತ್ತೇವೆ ಎಂದು ಹೇಳಿಕೆ ನೀಡುವ ಬಿಜೆಪಿ ನಾಯಕರು ಮೊದಲು ತಮ್ಮದೇ ಪಕ್ಷದ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ ಎಂದು ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರದೀಪ್ ಬೇಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿಯ ಹಿಂದೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ-ವಿಖ್ಯಾತ್‌ ಶೆಟ್ಟಿ

0

ಉಡುಪಿಯ ಹಿಂದೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ- ವಿಖ್ಯಾತ್‌ ಶೆಟ್ಟಿ

ಕಾರ್ಕಳ:ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿ ಬಳಿ ಜಿಹಾದಿ ಮನಸ್ಥಿತಿಯ ಮುಸ್ಲಿಂ ಗೂಂಡಾಗಳಿಂದ ಕಾಂಗ್ರೆಸ್ ನ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಪ್ರಮುಖವಾಗಿ ಕರಾವಳಿ ಪ್ರದೇಶದಲ್ಲಿ ಹಿಂದೂ ಕಾಂಗ್ರೆಸ್‌ ಕಾರ್ಯಕರ್ತರ ದಯನೀಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್‌ ಶೆಟ್ಟಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು ಜನಸಾಮಾನ್ಯರಿಗೆ ಸೂಕ್ತ ರಕ್ಷಣೆ ಇಲ್ಲದಂತೆ ಆಗಿದೆ. ಇವರ ಓಲೈಕೆ ಹಾಗೂ ತುಷ್ಠೀಕರಣ ರಾಜಕೀಯದಿಂದಾಗಿ ರಾಜ್ಯದ ಹಲವೆಡೆ ಗಲಭೆ, ಅತ್ಯಾಚಾರದಂತಹ ಅಹಿತಕರ ಘಟನೆಗಳು ನಿರಂತರವಾಗಿ ನಡೆಯುತ್ತಲೆ ಇದ್ದು, ಇದೀಗ ತಮ್ಮದೆ ಪಕ್ಷದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುವಷ್ಟರ ಮಟ್ಟಿಗೆ ಅದು ಮುಂದುವರಿದಿದೆ.

ನಮಗೆ ಒಬ್ಬ ಹಿಂದೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ನಮ್ಮ ಹಿಂದೂನೇ, ಬಿಜೆಪಿ ಪಕ್ಷದಲ್ಲಿದ್ದರೂ ನಮ್ಮ ಹಿಂದೂವೇ. ಹಾಗಾಗಿ ಅಗತ್ಯ ಬಿದ್ದರೆ ಹಲ್ಲೆಗೊಳಗಾದ ಕಾಂಗ್ರೆಸ್ ನ ಹಿಂದೂ ಕಾರ್ಯಕರ್ತರ ಬೆಂಬಲವಾಗಿ ನಮ್ಮ ಹಿಂದೂಪರ ಸಂಘ ಪರಿವಾರದ ಕಾರ್ಯಕರ್ತರು ರಕ್ಷಣೆ ನೀಡಲು ತಯಾರಿದ್ದೇವೆ. ನೀವು ಯಾವಾಗ ಬೇಕಾದರೂ ನಮ್ಮ ನೆರವು ಕೇಳಬಹುದು. ಮುಸ್ಲಿಂ ಗೂಂಡಾಗಳಿಂದ ಹಿಂದೂಗಳ ಮೇಲೆ ಎಲ್ಲಯೇ ದಬ್ಬಾಳಿಕೆ ನಡೆದರು ನಾವು ಸಹಿಸುವುದಿಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು.-ಅನಿತಾ ಡಿಸೋಜ

0

ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು. ಯುವತಿಗೆ ಬಿಯರ್ ನಲ್ಲಿ ಅಮಲು ಪದಾರ್ಥವನ್ನು ಬೆರೆಸಿ ನಾಲ್ಕೈದು ಮಂದಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತ ಯುವತಿ ಕೇಸ್ ದಾಖಲಿಸಿದ್ದಾರೆ.

ಅವಳ ಹೇಳಿಕೆಯಂತೆ ಆಕೆಗೆ ಮದ್ಯಪಾನ ಮಾಡುವ ಚಟವಿದೆಯಾ ಅನ್ನುವ ಬಗ್ಗೆ ಅನುಮಾನ ಮೂಡಿಸುತ್ತಿದೆ. ಬಿಯರ್ ಒಂದು ಮದ್ಯಪಾನದ ಪೇಯ ಇದಕ್ಕೆ ಅಮಲು ಪದಾರ್ಥ ಸೇರಿಸುವ ಅಗತ್ಯ ಏನು ಬಂತು? ಕುಡಿಯುವ ಚಟ ಯಾರಿಗಿತ್ತು ಮತ್ತು ಯಾವ ಮಟ್ಟಕ್ಕೆ ಇದೆ ಎಂದೂ ಕೂಲಾಂಕುಶವಾಗಿ ಪರಿಶೀಲನೆ ಮಾಡಬೇಕು.

ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಆರೋಪಿಗಳು ಹಿಂದೂ,ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ ಹೀಗಿರುವಾಗ ಇದು ಲವ್ ಜಿಹಾದ್ ಹೇಗಾಗುತ್ತದೆ…?.

ಕಾರ್ಕಳದ ಶಾಸಕ ಸುನೀಲ್ ಕುಮಾರ್ ವಿರುದ್ಧ ಸರಕಾರಿ ಸಿಮೆಂಟ್ ಕಳ್ಳತನ ಮತ್ತು ದುರುಪಯೋಗ ಹಾಗೂ ಥೀಮ್ ಪಾರ್ಕ್ ನಲ್ಲಿ ಸ್ಥಾಪಿಸಿದ ಪರಶುರಾಮನ ಮೂರ್ತಿಯ ಅವ್ಯವಹಾರದ ಬಗ್ಗೆ ಗಂಭೀರವಾದ ಆರೋಪವಿದ್ದು ಈ ಬಗ್ಗೆ ರಾಜ್ಯ ಸರಕಾರ ತನಿಖೆಗೆ ಮುಂದಾದ ಕೂಡಲೇ ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣವೊಂದು ಸಂಚಲನ ಉಂಟುಮಾಡಲು ಕಾರಣವೇನು…?.

ರಾಜಸ್ಥಾನದಲ್ಲಿ ಈ ಹಿಂದೆ ಇಸ್ಲಾಂ ಧರ್ಮದ ಕುರಿತು ಕೆಟ್ಟದಾಗಿ ಕಾಮೆಂಟ್ ಮಾಡಿದ ದರ್ಜಿಯೊಬ್ಬರನ್ನು ಹತ್ಯೆಗೈದ ಕುರಿತಾದ ಘಟನೆ ನಡೆದಿದ್ದು ಪತಾಕಿಗಳನ್ನು ಬಂಧಿಸಿದ ಬಳಿಕ ಪಾತಕಿಗಳು R.S.S ನ ಮುಸ್ಲಿಂ ಮಂಚ್ ಎಂಬ ಸಂಘಟನೆಯ ಸದಸ್ಯರು ಹಾಗೂ ಭಾಜಪದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೆಂಬ ಸತ್ಯ ಹೊರಬಂದವು ಅದೇ ರೀತಿ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಸಂಘಪರಿವಾರದ ಮುಸ್ಲಿಂ ಮಂಚ್ ನ ಸಂಪರ್ಕ ಇದೆಯೇ..?

ಅವರು ಭಾಜಪದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರೇ ಪ್ರಧಾನ ಆರೋಪಿ ಅಲ್ತಾಫ್ ಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪಿ ಅಭಯ್ ಗೆ ಡ್ರಗ್ಸ್ ಎಲ್ಲಿಂದ ಬಂತು ಆತ ಯಾವುದಾದರೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೇ ಅಭಯ್ ಗೆ ಡ್ರಗ್ಸ್ ಸರಬರಾಜಿನ ಮೂಲ ಯಾವುದು ಎಂಬುದು ಜನತೆಗೆ ತಿಳಿಯಬೇಕಾದರೆ ತನಿಖೆಯನ್ನು ಬೇರು ಮಟ್ಟದಿಂದ ಮಾಡಬೇಕಾಗುತ್ತದೆ.

-ಅನಿತಾ ಡಿಸೋಜ, ಅಧ್ಯಕ್ಷರು ಬ್ಲಾಕ್ ಮಹಿಳಾ ಕಾಂಗ್ರೆಸ್, ಕಾರ್ಕಳ.

ಕಾರ್ಕಳ:ಕಾರು-ಬೈಕ್ ನಡುವೆ ಡಿಕ್ಕಿ

0

ಕಾರ್ಕಳ:ಕಾರು-ಬೈಕ್ ನಡುವೆ ಡಿಕ್ಕಿ

ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ಗೋವಿಂದೂರಿನ ಅನಂತಮತಿ ಶಾಲೆಯ ಬಳಿ ನಡೆದಿದೆ.

ಗೋವಿಂದೂರು ನಿವಾಸಿ ಸಂತೋಷ ಗಾಯಗೊಂಡವರು.ಸಂತೋಷ್ ರವರು ಆ.27ರಂದು ಯರ್ಲಪಾಡಿ ಕಡೆಯಿಂದ ಬೈಲೂರು ಕಡೆಗೆ ಬೈಕ್ ನಲ್ಲಿ ಹೊರಟಿದ್ದ ಸಂದರ್ಭ ಅನಂತಮತಿ ಶಾಲೆಯ ಬಳಿ ಕಾರು ಚಾಲಕನು ಯಾವುದೆ ಸೂಚನೆ ಕೊಡದೆ ಕಾರನ್ನು ಬಲಕ್ಕೆ ತಿರುಗಿಸಿದ್ದು ಬೈಕ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಬೈಕ್ ಸವಾರ ಸಂತೋಷ್ ಗಂಭೀರ ಗಾಯಗೊಂಡಿದ್ದು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಮಣ್ಣು ಡಾ. ಸೌರಭ್ ತಂತ್ರಿ ಅವರಿಗೆ ಇಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ

0

ಬೆಳ್ಮಣ್ಣು ಡಾ. ಸೌರಭ್ ತಂತ್ರಿ ಅವರಿಗೆ ಇಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ

ಮಾಹೆಯಲ್ಲಿ ಮೆಟೀರಿಯಲ್ ಸೈನ್ಸ್ ವಾಹಿನಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪಿ.ಎಚ್.ಡಿ ಅಧ್ಯಯನ ನಡೆಸಿದ ಬೆಳ್ಮಣ್ಣಿನ  ಡಾ. ಸೌರಭ್ ತಂತ್ರಿ ಅವರು ಡಾಕ್ಟರೇಟ್ ಪದವಿಗೆ ಭಾಜರಾಗಿದ್ದಾರೆ. ಇವರು ಬೆಳ್ಮಣ್ಣಿನ ಪ್ರಖ್ಯಾತ ನಡಿಗುತ್ತು ತಂತ್ರಿ ಕುಟುಂಬದ ಸತೀಶ್ ತಂತ್ರಿ ಹಾಗೂ ಲಕ್ಷ್ಮಿತಂತ್ರಿಯವರ ಸುಪುತ್ರರಾಗಿರುವ ಇವರು ಬಂಟಕಲ್ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದು ಮಾಹೆಯಲ್ಲಿ ಎಂ.ಟೆಕ್ ಪಡೆದ ನಂತರ ಪಿ.ಎಚ್.ಡಿ. ಅಧ್ಯಯನವನ್ನು ನಡೆಸುತ್ತಿದ್ದರು.

ಸಿಂಥೆಸಿಸ್ ಅಂಡ್ ಕ್ಯಾರಕ್ಟರೈಸೇಫನ್ ಆಫ್ ಮೋಡಿಫೈಡ್ ಟಿ6-ಎಎ70075 ಮ್ಯಾಟಿಕ್ಸ್ ಬೇಸಡ್ ಗ್ರಾನೈಟ್ ಪೌಡರ್ ಅಂಡ್ ಸಿಲಿಕಾನ್ ನೈಟ್ರೆಡ್ ಪರ್ಟಿಕ್ಯುಲೇಟ್ಸ್ ರೀ ಇನ್‌ಪ್ಲೋರ್ಸ್ಡ್ ಕಾಂಪೋಸಿಟ್ಸ್ ಎಂಬ ವಿಷಯದ ಕುರಿತು ಡಾ. ಶಿವಪ್ರಕಾಶ್ ವೈ.ಎಂ. ಅವರ ಮಾರ್ಗದರ್ಶನದಲ್ಲಿ ಡಾ. ಗುರುಮೂರ್ತಿ ಬಿ.ಎಂ. ಅವರು ರಿಸರ್ಚ್ ಕೋ – ಗೈಡ್ ಆಗಿದ್ದು ಡಾ. ಸೌರಭ್ ತಂತ್ರಿಯವರು ಅಧ್ಯಯನ ನಡೆಸಿ ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಮಾಹೆಗೆ ಸಲ್ಲಿಸಿದರು.

ಮೂರನೇ ಆರೋಪಿ ಅಭಯ್ ಬಂಧನ:ಕಾರ್ಕಳ ಬಜರಂಗದಳ ಸಂಯೋಜಕ ಮನೀಶ್ ನಿಟ್ಟೆ ಪ್ರತಿಕ್ರಿಯೆ

0

ಮೂರನೇ ಆರೋಪಿ ಅಭಯ್ ಬಂಧನ:ಕಾರ್ಕಳ ಬಜರಂಗದಳ ಸಂಯೋಜಕ ಮನೀಶ್ ನಿಟ್ಟೆ ಪ್ರತಿಕ್ರಿಯೆ

ಕಾರ್ಕಳ ಗ್ಯಾಂಗ್ ರೇಪ್ ಪ್ರಕರಣದ ಮೂರನೇ ಆರೋಪಿ ಅಭಯ್ ಎಂಬಾತ ಬಜರಂಗದಳ ಸಂಘಟನೆಯ ಕಾರ್ಯಕರ್ತನಲ್ಲ. ಆತನಿಗೂ ಬಜರಂಗದಳಕ್ಕೂ ಯಾವುದೇ ರೀತಿಯ ಸಂಬಂಧ ಅಥವಾ ಸಂಪರ್ಕ ಇರುವುದಿಲ್ಲ. ಸಂಘಟನೆಯ ಹೆಸರು ಕೆಡಿಸಲು ಮಾಡುತ್ತಿರುವ ಅಪಪ್ರಚಾರಕ್ಕೆ ಸ್ಪಷ್ಟನೆ ನೀಡುವ ಅವಶ್ಯಕತೆಯೂ ನಮಗಿಲ್ಲ. ಆದರೆ ಆರೋಪಿ ಯಾರೇ ಇರಲಿ ಕಾನೂನಿನ ಶಿಕ್ಷೆಗೆ ಒಳಪಡಲೇಬೇಕು ಎಂದು ಕಾರ್ಕಳ ತಾಲೂಕು ಬಜರಂಗದಳ ಸಂಯೋಜಕ ಮನೀಶ್ ನಿಟ್ಟೆ ಹೇಳಿದ್ದಾರೆ.

ಇಲ್ಲಿ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ನಮಗೆ ಮುಖ್ಯವಲ್ಲ, ಸಂತ್ರಸ್ತ ಯುವತಿಗೆ ನ್ಯಾಯ ಸಿಗಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇ ಬೇಕು ಇದು ನಮ್ಮ ಆಗ್ರಹ. ಪೋಲಿಸ್ ತನಿಖೆಯಲ್ಲಿರುವ ಶಂಕಿತ ಆರೋಪಿಗಳು ತಪ್ಪಿತಸ್ಥರು ಎಂದಾದಲ್ಲಿ ಅವರ ವಿರುದ್ಧವೂ ಅತ್ಯಂತ ಪ್ರಬಲ ಕಾಯ್ದೆ ಮೂಲಕ ಕೇಸ್ ದಾಖಲಾಗಬೇಕು. ಇಂತಹ ಅಮಾನುಷ ಕೃತ್ಯಗಳು ಕಾರ್ಕಳದಲ್ಲಿ ಇಲ್ಲಿಗೆ ಕೊನೆಯಾಗಬೇಕು ಮತ್ತು ಈ ಪ್ರಕರಣದಲ್ಲಿ ನೀಡುವ ಕಾನೂನಿನ ಶಿಕ್ಷೆ ಎಲ್ಲರಿಗೂ ಪಾಠವಾಗಬೇಕು. ಹಿಂದೂ ಎಂದ ಮಾತ್ರಕ್ಕೆ ಆತ ಸಂಘಟನೆಯ ಕಾರ್ಯಕರ್ತನಾಗುವುದಿಲ್ಲ. ಈ ಪ್ರಕರಣದಲ್ಲಿ ಬಜರಂಗದಳದ ನಿಲುವು ಸ್ಪಷ್ಟವಾಗಿದೆ ಎಂದಿದ್ದಾರೆ.

ಕಾರ್ಕಳ:ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಭಿನವ ಭಾರತ ಕಾರ್ಕಳ ಮನವಿ

0

ಕಾರ್ಕಳ:ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಭಿನವ ಭಾರತ ಕಾರ್ಕಳ ಮನವಿ

ಕಾರ್ಕಳ ಸೇರಿ ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಅತಿ ಶೀಘ್ರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯ ಜನತೆ ನೆಮ್ಮದಿಯ ಜೀವನ ಸಾಗಿಸುವಂತೆ ಹಾಗೂ ದೇಶದ ಯುವ ಜನತೆ ಸುಶಿಕ್ಷಿತ ಸಭ್ಯ ನಾಗರೀಕರಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಕಾರ್ಕಳ ಪೊಲೀಸ್ ಅಧಿಕಾರಿಗಳಿಗೆ ಅಭಿನವ ಭಾರತ ಕಾರ್ಕಳ ವತಿಯಿಂದ ಮನವಿ ಸಲ್ಲಿಸಲಾಯಿತು.

ನಮ್ಮ ದೇಶದ ಸುದೃಢ ಆಸ್ತಿಯೆಂದರೆ ಈ ದೇಶದ ಯುವ ಜನತೆ.ದೇಶವನ್ನು ಅಸ್ಥಿರಗೊಳಿಸಲು ದೇಶ ವಿರೋಧಿಗಳು ಮಾಡುವ ಷಡ್ಯಂತ್ರದ ಮೊದಲ ಭಾಗವೇ ಯುವ ಜನತೆಯ ದಾರಿ ತಪ್ಪಿಸಿ ಅವರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವುದು.

ದೇಶದ ಎಲ್ಲೆಡೆ ಇರುವ ಈ ಮಾದಕ ದ್ರವ್ಯಗಳ ಮಾಫಿಯಾ ಕರ್ನಾಟಕದ ಕರಾವಳಿ ಭಾಗದಲ್ಲಿ ಬೇರೂರಿ ಹಲವು ದಶಕಗಳೇ ಕಳೆದರೂ ಸಂಬಂಧ ಪಟ್ಟ ಇಲಾಖೆಗಳಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಪರಿಣಾಮಕಾರಿ ಕ್ರಮ ಆಗಿಲ್ಲ.ಈ ಕಾರಣದಿಂದಾಗಿಯೇ ಈ ಡ್ರಗ್ಸ್ ಮಾಫಿಯಾ ಕಾರ್ಕಳ ಎಂಬ ಸುಶಿಕ್ಷಿತ ಸಭ್ಯ ತಾಲ್ಲೂಕಿನಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿ ದೇಶದ ಭವಿಷ್ಯದ ಸಶಕ್ತ ಪ್ರಜೆಗಳನ್ನು ನಿರ್ವೀಯರನ್ನಾಗಿಸಿ, ಅವರನ್ನು ದೇಶದ್ರೋಹಿ ಕೃತ್ಯಗಳಿಗೆ ಬಳಸಿಕೊಳ್ಳುವಂತಹ ಮಟ್ಟಕ್ಕೆ ಬೆಳೆದಿರುವುದು ಬಹಳ ಆತಂಕಕ್ಕೆ ಕಾರಣವಾಗಿದೆ.

ಅದೂ ಅಲ್ಲದೆ ಮುಗ್ಧ ಯುವತಿಯರಿಗೆ ಗಾಂಜಾ ಡ್ರಗ್ಸ್ ಇನ್ನಿತರ ಮಾದಕ ವಸ್ತುಗಳನ್ನು ಮೋಸದಿಂದ ಅಥವಾ ಬಲವಂತದಿಂದ ತಿನ್ನಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ, ಅವರ ಅಶ್ಲೀಲ ಚಿತ್ರಗಳನ್ನು ತೆಗೆದು ನಿರಂತರ ದೈಹಿಕ ಶೋಷಣೆ ಮಾಡುತ್ತಿರುವ ಹಲವಾರು ಘಟನೆಗಳು ನಡೆಯುತ್ತಿದ್ದು, ಮರ್ಯಾದೆಗೆ ಅಂಜಿ ಈ ಘಟನೆಗಳು ಎಲ್ಲೂ ಬೆಳಕಿಗೆ ಬರುತ್ತಿಲ್ಲ.

ಮಾದಕ ದ್ರವ್ಯ ಮಾರಾಟ ಸಾಗಾಟ, ಸೇವನೆಯ ವಿರುದ್ದ ತುರ್ತು ಕ್ರಮ ಕೈಗೊಳ್ಳಲು ಇರುವ ಪ್ರತ್ಯೇಕ ವಿಜಿಲೆನ್ಸ್ ಘಟಕವನ್ನು ಸಕ್ರೀಯ ಗೊಳಿಸುವುದು,ಮಾದಕ ದ್ರವ್ಯದ ಬಗ್ಗೆ ದೂರು ನೀಡಲು ಟೋಲ್ ಫ್ರೀ ನಂಬರ್ ನೀಡುವುದು ,ಪ್ರತಿ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ಧ ದೂರು, ಮಾಹಿತಿ ನೀಡಲು ದೂರು ಪೆಟ್ಟಿಗೆ ಸ್ಥಾಪಿಸುವುದು, ಹಳೆಯ ಡ್ರಗ್ಸ್ ಪೆಡ್ಲರ್ ಗಳನ್ನು ಪ್ರತಿ ತಿಂಗಳು ಕರೆಯಿಸಿ ಪೆರೇಡ್ ನಡೀಸಬೇಕು.

ಕಾರ್ಕಳ ಸೇರಿ ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಅತಿ ಶೀಘ್ರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯ ಜನತೆ ನೆಮ್ಮದಿಯ ಜೀವನ ಸಾಗಿಸುವಂತೆ ಹಾಗೂ ದೇಶದ ಯುವ ಜನತೆ ಸುಶಿಕ್ಷಿತ ಸಭ್ಯ ನಾಗರೀಕರಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಎಂದು ಮನವಿ ಮಾಡಲಾಗಿದೆ.

ಡಾ. ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹೋರಾಟಕ್ಕೆ ಸಿಕ್ಕಿತು ಯಶಸ್ಸು ಹೋರಾಟಕ್ಕೆ ಬೆಚ್ಚಿ ಹಣ ನೀಡುವುದಾಗಿ ಕಂಪನಿ ಹೇಳಿಕೆ

0

ಡಾ. ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹೋರಾಟಕ್ಕೆ ಸಿಕ್ಕಿತು ಯಶಸ್ಸು

ಹೋರಾಟಕ್ಕೆ ಬೆಚ್ಚಿ ಹಣ ನೀಡುವುದಾಗಿ ಕಂಪನಿ ಹೇಳಿಕೆ

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆ ಯ ಕಾಮಗಾರಿಯ ಗುತ್ತಿಗೆದಾರರು ಸ್ಥಳೀಯ ಹಲವಾರು ಮಂದಿಗೆ ಮಾಡಿದ ವಂಚನೆಯನ್ನು ಸರಿ ಪಡಿಸುವ ನಿಟ್ಟಿನಲ್ಲಿ ಡಾ ರವೀಂದ್ರ ಶೆಟ್ಟಿಯವರ ನೇತೃತ್ವದ ಪಟ್ಟು ಬಿಡದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರೂ 385 ಕೋಟಿ ವೆಚ್ಚದಲ್ಲಿ 35 ಕಿ ಮಿ ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ ಮಾಡಲಾಗಿತ್ತು.ಈ ಟೆಂಡರ್ ನ್ನು ಮಹಾರಾಷ್ಟ್ರದ ನಾಗ್ಪುರದ ಡಿ ಪಿ ಜೈನ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

ಈ ಕಂಪನಿಯು ಈ ರಸ್ತೆಯ ಅಭಿವೃದ್ಧಿ ಕಾರ್ಯವನ್ನು 2023ನೇ ಸಾಲಿನಿಂದ ಆರಂಭ ಮಾಡಿತ್ತು. ಈ ಸಂದರ್ಭದಲ್ಲಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪೆಟ್ರೋಲ್ ಬಂಕ್ ಗಳಿಂದ ಡೀಸೆಲ್, ಪೆಟ್ರೋಲ್, ಕ್ರಷರ್ ಗಳಿಂದ ಜಲ್ಲಿ, ಜೀನಸು ಅಂಗಡಿಗಳಿಂದ ಆಹಾರ ಸಾಮಗ್ರಿ, ಸ್ಟೇಷನರಿ ಸಾಮಗ್ರಿ, ಪೀಟೋಪಕರಣ ಹೀಗೇ ಹಲವಾರು ಸಾಮಗ್ರಿಗಳನ್ನು ಈ ಕಂಪನಿ ಸಾಲದ ರೂಪದಲ್ಲಿ ಪಡೆದಿತ್ತು.ಇದೊಂದು ದೊಡ್ಡ ಕಂಪನಿ ಎಂದು ಭಾವಿಸಿ ಎಲ್ಲರೂ ಸಾಮಗ್ರಿಗಳನ್ನು ನೀಡಿದ್ದರು.

ವಂಚನೆಯ ಸುಳಿವು
ತಾವು ನೀಡಿದ ಸಾಮಗ್ರಿಗಳ ಬಿಲ್ಲು ಈ ತಿಂಗಳಿಗೆ ಪಾವತಿ ಆಗುತ್ತೆ, ಮುಂದಿನ ತಿಂಗಳು ಪಾವತಿ ಆಗುತ್ತೆ ಎಂದು ಕಾದು ಕೂತವರಿಗೆ ಹಣ ಸಿಗಲೇ ಇಲ್ಲ. ಈ ಕಂಪನಿಯ ಯಾರಲ್ಲಿ ಕೇಳಿದರು ಕೂಡ ಹಣ ಮಾತ್ರ ಬರಲೇ ಇಲ್ಲ. ಕೆಲವರು ನಾಗ್ಪುರದಲ್ಲಿರುವ ಡಿ ಪಿ ಜೈನ್ ಕಂಪನಿ ಗೆ ತೆರಳಿ ತಮ್ಮ ಹಣ ನೀಡುವಂತೆ ಕೇಳಿದರೂ ಅವರನ್ನು ತೆಪ್ಪಗೆ ಹಿಂದಕ್ಕೆ ಕಳುಹಿಸಲಾಗಿತ್ತು. ಇದರಿಂದ ಜನ ಹೈರಾಣ ಆಗಿ ಹೋಗಿದ್ದರು. ತಮ್ಮ ಸಮಸ್ಯೆ ಪರಿಹಾರ ಮಾಡೋದು ಹೇಗೆ ಎಂದೇ ಯಾರಿಗೂ ತಿಳಿಯಲಿಲ್ಲ.

ಡಾ. ರವೀಂದ್ರ ಶೆಟ್ಟಿ ಎಂಟ್ರಿ
ಈ ವಂಚನೆಯ ಮಾಹಿತಿಯನ್ನು ಕ್ರಷರ್ ಮಾಲಕರೋರ್ವರು ರಾಜ್ಯ ಕ್ರಷರ್ ಮಾಲಕರ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಯವರಲ್ಲಿ ತಿಳಿಸಿ ತಮ್ಮ ಸಮಸ್ಯೆ ಪರಿಹಾರ ಮಾಡುವಂತೆ ಮನವಿ ಮಾಡಿದರು.

45 ಜನರ ತಂಡ ನಾಗ್ಪುರಕ್ಕೆ
ಈ ಬಗ್ಗೆ ಹೋರಾಟದ ಅವಶ್ಯಕತೆ ಮನಗಂಡ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಸುಮಾರು 45 ಜನರ ತಂಡವನ್ನು ನಾಗ್ಪುರಕ್ಕೆ ಕೊಂಡೊಯ್ಡರು.

ನೆಲದಲ್ಲಿ ಕುಳಿತು ಪ್ರತಿಭಟನೆ
ನಾಗ್ಪುರಕ್ಕೆ ತೆರಳಿದ ಈ ತಂಡವು ಡಿ ಪಿ ಜೈನ್ ಕಂಪನಿಗೆ ಹೋಗಿ ವಂಚನೆ ಮಾಡಿದ ಹಣ ನೀಡುವಂತೆ ಮನವಿ ಮಾಡಿತು.ಆದರೆ ಅಲ್ಲಿ ಕೂಡ ಕಂಪನಿ ಸಿಬ್ಬಂದಿಗಳು ಮಾತ್ರ ಇದ್ದು ಹಣ ನೀಡುವ ನಿಟ್ಟಿನಲ್ಲಿ ಯಾವುದೇ ಮಾತುಕತೆ ಮಾಡಲಿಲ್ಲ. ಇದರಿಂದ ಕೆರಳಿದ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಹಾಗೂ ತಂಡವು ಕಚೇರಿಯೊಳಗೆ ನೆಲದಲ್ಲಿ ಕುಳಿತು ಧರಣಿ ಆರಂಭ ಮಾಡಿತು.

ಬೆಳಗ್ಗೆ ಆರಂಭ ಆದ ಧರಣಿ ನಿರತರ ಮನ ಒಲಿಸಲು ಕಂಪನಿ ಪ್ರಯತ್ನ ಪಟ್ಟರು ಕೂಡ ಎಲ್ಲರ ಹಣ ಸಿಗೋವರೆಗೂ ತಾವು ಕದಲೋದಿಲ್ಲ ಎಂದು ಡಾ. ರವೀಂದ್ರ ಶೆಟ್ಟಿ ಪಟ್ಟು ಬಿಡಲೇ ಇಲ್ಲ.

ಸುಮಾರು ಮದ್ಯಾಹ್ನ ಹೊತ್ತಿಗೆ ಈ ಕಂಪನಿಯ ಮುಖ್ಯಸ್ಥರು ಡಾ ರವೀಂದ್ರ ಶೆಟ್ಟಿಯವರ ಬಳಿ ಬಂದು ಮಾತುಕತೆ ಮಾಡುವಂತೆ ತಿಳಿಸಿದರು. ಆದ್ರೆ ವಂಚನೆಗೆ ಒಳಗಾದವರಿಗೆ ಹಣ ಕೊಡದಿದ್ದರೆ ಎಷ್ಟು ದಿನ ಆದರೂ ತಾವು ಇಲ್ಲಿಂದ ಕದಲೋದಿಲ್ಲ ಎಂದು ತಿಳಿಸಲಾಯಿತು.

ಬಿಜೆಪಿ ಶಾಸಕ ಮೋಹನ್ ಮತೆ ಸ್ಥಳಕ್ಕೆ
ಈ. ವಿಚಾರದ ಮಾಹಿತಿ ತಿಳಿದ ನಾಗ್ಪುರದ ಶಾಸಕರಾದ ಮೋಹನ್ ಮತೆ ಸ್ಥಳಕ್ಕೆ ಆಗಮಿಸಿ ಡಾ. ರವೀಂದ್ರ ಶೆಟ್ಟಿಯವರ ಮನ ಒಳಿಸುವ ಪ್ರಯತ್ನ ಮಾಡಿದರು.ಬಳಿಕ ಅಲ್ಲಿಂದ ಶಾಸಕರು ಕರ್ನಾಟಕದ ಬಿಜೆಪಿ ಜನ ಪ್ರತಿನಿಧಿಗಳನ್ನು ಹಾಗೂ ನಾಗ್ಪುರದಲ್ಲಿರುವ ಸುರತ್ಕಲ್ ನ ನವೀನ್ ಶೆಟ್ಟಿಯವರ ಮುಖಾಂತರ ಹೋರಾಟಗಾರರ ಮನ ಒಲಿಸುವ ಪ್ರಯತ್ನ ಮಾಡಲಾಯಿತು

ಬಳಿಕ ಶಾಸಕ ಮೋಹನ್ ಮತೆಯವರು ಡಿ ಪಿ ಜೈನ್ ಕಂಪನಿಯ ಜೊತೆಗೆ ಡಾ. ರವೀಂದ್ರ ಶೆಟ್ಟಿಯವರ ಮೂಲಕ ಮಾತುಕತೆ ಮಾಡಿಸಿದರು. ವಂಚನೆ ಆದವರಿಗೆ ಹಣ ನೀಡಿದ್ರೆ ಮಾತ್ರ ತಾವೆಲ್ಲರೂ ಇಲ್ಲಿಂದ ತೆರಳುವುದಾಗಿ ತಿಳಿಸಲಾಯಿತು.

ಕೊನೆಗೆ ಡಿ ಪಿ ಜೈನ್ ಕಂಪನಿಯು ಹಣ ನೀಡುವುದಾಗಿ ಒಪ್ಪಿ ಕೊಂಡಿದೆ.ಡಾ ರವೀಂದ್ರ ಶೆಟ್ಟಿಯವರ ಪಟ್ಟು ಬಿಡದ ಹೋರಾಟದ ಜೊತೆಗೆ ಹಲವಾರು ಮಂದಿ ಜೊತೆಗೂಡಿ ಈ ಹೋರಾಟಕ್ಕೆ ಯಶಸ್ಸು ದೊರಕಿದೆ.

ಕಾರ್ಕಳ:ಪ್ರಕರಣದ ಮೂರನೇ ಆರೋಪಿ ಬೀಜೆಪಿ ಬೆಂಬಲಿಗ-ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ

0

ಸುನಿಲ್ ಕುಮಾರ್ ಗೆ ಮಾನ ಮರ್ಯಾದೆ ಉಳಿದಿದ್ದರೆ ರಾಜಿನಾಮೆ ನೀಡಲಿ-ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ

ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಇಂದು ಸಭೆ ನಡೆಸಿ ಮಾತಾಡಿದ ಸುನಿಲ್ ಕುಮಾರ್ ಜಿಹಾದಿ ಕೃತ್ಯ,ಕಾಂಗ್ರೆಸ್ ಸರಕಾರದ ವೈಫಲ್ಯ ಎಂಬುದಾಗಿ ಹೇಳಿದ್ದರು.ಇದೀಗ ಅವರದೇ ಬೆಂಬಲಿಗ ಕಾರ್ಕಳದ ಅಭಯ್ ಎನ್ನುವ ಬಿಜೆಪಿ ಕಾರ್ಯಕರ್ತ ಭಂದನವಾಗಿದ್ದು, ಕಾರ್ಕಳ ಶಾಸಕರು ಇದಕ್ಕೇನು ಉತ್ತರ ಕೊಡುತ್ತಾರೆಂದು ಸ್ಫಷ್ಟಪಡಿಸಬೇಕು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಹೇಳಿದ್ದಾರೆ.

ಆರೋಪಿಯು ಸುನಿಲ್ ಕುಮಾರ್ ಭಾವಚಿತ್ರವನ್ನು ತನ್ನ ಪೇಸ್ಬುಕ್‌ ಖಾತೆಯ ಕವರ್ ಫೋಟೊದಲ್ಲಿ ಹಾಕಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತಿದ್ದು, ಸುನಿಲ್ ಕುಮಾರ್ ಅವರು ಅವರ ಭಾಷಣದಲ್ಲಿ ಜಾತಿ ಜಾತಿ ಧರ್ಮಧರ್ಮ ಗಳ ಮಧ್ಯೆ ಕಂದಕವನ್ನು ನಿರ್ಮಿಸಿ ವೋಟ್ ಬ್ಯಾಂಕ್ ಗಳಿಸುವ ಹುನ್ನಾರ ಕೈಬಿಡಬೇಕು ಎಂದು ಅವರು ಹೇಳಿದ್ದಾರೆ.

ಹಿಂದು ಯುವಕರು ಮನಸ್ಸು ಮಾಡಿದರೆ ಹೆಣ ಇಡಲು ದೇಶದಲ್ಲಿ ಪ್ರಿಜ್ ಸಾಕಾಗಲಿಕ್ಕಿಲ್ಲ ಎಂದು ಪರೋಕ್ಷವಾಗಿ ಹಿಂದು ಯುವಕರಿಗೆ ಅತ್ಯಾಚಾರ ನಡೆಸಲು ಕರೆ ನೀಡಿದ ಸುನೀಲ್ ಕುಮಾರ್ ಅವರದ್ದು ಪೈಶಾಚಿಕ ಮನಸ್ಥಿತಿಯಾಗಿದೆ. ಒಬ್ಬ ಅತ್ಯಾಚಾರಿಗೂ ಇವರಿಗೂ ಏನು ವ್ಯತ್ಯಾಸ?

ಒಂದು ಅತ್ಯಾಚಾರವನ್ನು ಖಂಡಿಸುವ ಭರದಲ್ಲಿ, ಒಂದು ಅತ್ಯಾಚಾರದಿಂದ ರಾಜಕೀಯ ಲಾಭ ಪಡೆಯುವ ಭರದಲ್ಲಿ ಸಾವಿರಾರು ಅತ್ಯಾಚಾರಕ್ಕೆ ಸುನೀಲ್ ಕುಮಾರ್ ಕರೆ ನೀಡಿರುವುದನ್ನು ನಾಗರಿಕ ಸಮಾಜ ಖಂಡಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಆರೋಪಿ ಅಭಯ್ ದ್ದು ಎನ್ನಲಾದ ಫೇಸ್ ಬುಕ್ ಖಾತೆಯ ಫೋಟೋ

ಕಾರ್ಕಳದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು,ಮಾದಕ ದ್ರವ್ಯ ಕಡಿವಾಣ ಹಾಕಬೇಕು-ಡಾ. ರವೀಂದ್ರ ಶೆಟ್ಟಿ ಆಗ್ರಹ

0

ಕಾರ್ಕಳದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಫೆಡರೇಷನ್ ಆಫ್ ಕ್ವಾರಿ ಒನರ್ಸ್ ಅಸೋಸಿಯೇಷನ್ ನ ರಾಜ್ಯ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.

ಈ ದುಷ್ಕೃತ್ಯದಲ್ಲಿ ಪಾಲ್ಗೊಂಡವರಿಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲವಾದರೆ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಮಾದಕ ದ್ರವ್ಯ ಕಡಿವಾಣ:
ತನಿಖೆಯ ಪ್ರಾಥಮಿಕ ಹಂತದಲ್ಲಿ ಯುವತಿ ಮಾದಕ ದ್ರವ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ.ಜಿಲ್ಲೆಯಲ್ಲಿ ಸೇರಿದಂತೆ ರಾಜಯ್ಯದಲ್ಲಿ ರಾರೋಷವಾಗಿ ಮಾದಕ ದ್ರವ್ಯಗಳ ದಂದೆ ನಡೆಯುತ್ತಿದೆ.ಪೊಲೀಸರು ಇದರ ಹಿಂದೆ ಇರುವವರನ್ನು ಬಂಧಿಸಬೇಕು.ಯುವ ಸಮಾಜ ಮಾದಕ ದ್ರವ್ಯದ ವ್ಯಸನಿಗಳಾಗುತ್ತಿದ್ದರೆ.ಪೊಲೀಸರು  ಈ ಕೂಡಲೇ ಕಾರ್ಯ ಪ್ರವೃತ್ತರಾಗಿ ದಂಧೆಯನ್ನು ಮಟ್ಟಹಾಕಬೇಕು ಎಂದು ಅವರು ಹೇಳಿದ್ದಾರೆ.