ಹೆಬ್ರಿ:ಸೌಜನ್ಯಗೆ ನ್ಯಾಯ ಸಿಗುವಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ
ಧರ್ಮಸ್ಥಳದಲ್ಲಿ ಕಳೆದ 11 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಈಗಲೂ ಬಿಸಿಬಿಸಿ ಚರ್ಚೆಯಲ್ಲಿದೆ. ಈ ಪ್ರಕರಣದ ಆರೋಪಿಗಳು ಯಾರು ಅನ್ನೋದನ್ನು ತನಿಖಾಧಿಕಾರಿಗಳಿಗೆ ಇಲ್ಲಿಯತನಕ ಪತ್ತೆ ಹಚ್ಚಲಾಗದಿದ್ದರೂ ಕೂಡ ಜನರ ಬಾಯಲ್ಲಿ ಅವರಿವರ ಹೆಸರು ಕಳೆದ 11 ವರ್ಷಗಳಿಂದಲೂ ಹರಿದಾಡುತ್ತಲೇ ಇದೆ. ಈ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ರಕ್ಷಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿರುವ ಮಧ್ಯೆಯೇ ಇತ್ತೀಚೆಗೆ ಬಂಧಿತನಾಗಿದ್ದ ಸಂತೋಷ್ ರಾವ್ ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು.
ಇದೀಗ ಮತ್ತೆ ಹೋರಾಟಕ್ಕೆ ಮುನ್ನೆಲೆಗೆ ಬಂದಿದೆ.ಸೌಜನ್ಯಗೆ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಆರೋಪಿಗಳ ಬಂಧನವಾಗಬೇಕು ಎಂದು ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.ಸೌಜನ್ಯ ಅತ್ಯಾಚಾರಗೈದು ಕೊಲೆಮಾಡಿದವರ ಬಂಧನವಾಗಬೇಕು ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಸಮಾನ ಮನಸ್ಕರ ತಂಡ ಪೂಜೆ ಸಲ್ಲಿಸಿದೆ.
ಸಹೋದರಿ ಸೌಜನ್ಯಳಿಗೆ ನ್ಯಾಯ ಸಿಗಬೇಕು ಮತ್ತು ಮತ್ತು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನೆ ಮಾಡದೆ ಧರ್ಮ ಮತ್ತು ನ್ಯಾಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ.ಈ ಸಂದರ್ಭ ಕುಚ್ಚೂರು ಶ್ರೀಕಾಂತ್ ಹಾಗೂ ಹಲವು ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.